skip to main | skip to sidebar

About me

My Photo
Amritha
View my complete profile

Archivo del blog

  • ▼ 2010 (2)
    • ▼ February (2)
      • ಹೊಸ ಟೈಮ್ ಪಾಸು -ಫಾರ್ಮವಿಲ್ಲೇ
      • ಚಿಕಾಗೋದಿಂದ ಬರೋವಾಗ .....
  • ► 2009 (2)
    • ► October (1)
    • ► August (1)

Followers

Powered By Blogger

ಸುಮ್ಮನೇ..... ಟೈಂಪಾಸ್ ... :)

ಹೊಸ ಟೈಮ್ ಪಾಸು -ಫಾರ್ಮವಿಲ್ಲೇ

Thursday, February 25, 2010

ಏನು ಕೆಲಸ ಇಲ್ಲ .. ಏನು ಮಾಡಲು ಮೂಡ ಇಲ್ಲ ಎನ್ನುತ್ತಾ ಕುಳಿತಿದ್ದ ನನಗೆ, ಫೇಸ್ ಬುಕ್, ಫಾರ್ಮ್ ವಿಲ್ಲೆಯಾ ರೂಪದಲ್ಲಿ ನನಗೆ "ಮಣ್ಣಿನ ಮಗಳು " ಆಗೋ ಅವಕಾಶ್ ಒದಗಿಸಿ ಕೊಟ್ಟು,ಹೊಸ "ಫೇಸ್" ಅನ್ನು ತಂದು ಕೊಟ್ಟಿದೆ. ದುಡ್ಡು ,ಕಾಸು ಕೊಡದೆ ಡೈರೆಕ್ಟ್ ಆಗಿ 4 ಗದ್ದೆ(ಹೊಲ) ಕೊಟ್ಟು ,ಹಾರೆ ಪಿಕ್ಕಾಸು ಕೊಟ್ಟೂ .. ಕೋಳಿ ,ಕುರಿ, ದನ ಸಾಕೋ ಯೋಗ ಒದಗಿಸಿದೆ . ಅದಿಕ್ಕೆ ನಾನು ಫೇಸ್ ಬುಕ್ ಗೆ ತುಂಬಾ ಆಭಾರಿ ಆಗಿದ್ದೇನೆ.
ಈಗ ದಿನವೆಲ್ಲ ನನಗೆ ನಂ ಗದ್ದೆಗಳದ್ದೆ ಯೋಚನೆ .. ಊಟ ,ತಿಂಡಿ ನಿದ್ದೆ ಗಿಂತ ಮೊದಲು ನನಗೆ ನಂ ಬೆಳೆಗಳನ್ನು ನೋಡೋದೇ ಒಂದು ಆನಂದ.ಕೈಯಾರೆ ಬೆಳೆದ soya beans ,ಗುಲಾಬಿಗಳು ,ಬದನೆ ಕಾಯಿ,ದ್ರಾಕ್ಷಿ ಇತ್ಯಾದಿಗಳನ್ನು ತೆಗೆದು ಮಾರ್ಕೆಟ್ ನಲ್ಲಿ ಮಾರೋವಾಗ ತುಂಬಾ ಖುಷಿ ಆಗುತ್ತದೆ. ಜೊತೇಲಿ ಸಮಾಜ ಸೇವೇನು ಮಾಡ್ತೀನಿ . ಪಕ್ಕದ ಗದ್ದೆಯಲ್ಲಿ ಎಲ್ಲ ಸರಿಯಾಗಿ ನಡೀತಾ ಉಂಟೋ .. ಇಲ್ವೋ ಎಲ್ಲ ನೋಡ್ಕೊಂಡು ಬರ್ತೀನಿ . ಕಾಗೆ ,ನರಿಗಳು ಉಪದ್ರ ಕೊಡ್ತಿದ್ರೆ ಓಡಿಸಿ ಉಪಕಾರ ಮಾಡ್ತೀನಿ . ಅಗೆ(plowed land) ಆಗಿದ್ರೆ furtilizer ಹಾಕಿ ಬರ್ತೀನಿ ,ಕೋಳಿಗಳಿಗೆ ಕಾಳು ಹಾಕಿ ಬರ್ತೀನಿ !! ಅದಿಕ್ಕೆಲ್ಲಾ ಒಂದು ಚೂರು ಪಾರು ದುಡ್ಡು ಸಿಗುತ್ತೆ ಅಂತ ಹೇಳೋಣ..ಆದ್ರೆ ಜುಜುಬಿ 5,10 ಇಟ್ಕೊಂಡು ನಾನೇನು ಮಾಡಲಿ ? ಸಮಾಜ ಸೇವೆನೆ ಮುಖ್ಯ ಅಲ್ವಾ .. ನಂ ಫ್ರೆಂಡ್ಸ್ ಗಳಿಗೆ ಒಳ್ಳೆ ಬೆಳೆ ಬಂದ್ರೆ ,ಉಪಕಾರ ಮಾಡಿದಕ್ಕೆ ಒಂದು ಸಣ್ಣ ಗಿಫ್ಟ್ ಕೊಟ್ಟು ನೆನಪಲ್ಲಿ ಇಟ್ಕೊತರಲ್ಲ ಅಂತ ಅಷ್ಟೇ(ಕೊಡಲಿಲ್ಲ ಅಂದ್ರೆ ಕೇಳಿ ತೊಗೋತೀನಿ ಕೆಲವೊಮ್ಮೆ!!). ನನ್ನ ಗಂಡನಿಗೆ ಅಂತು ನನ್ನ ಗದ್ದೆ ತೋರಿಸಿ, ಹೊಟ್ಟೆ ಕಿಚ್ಚು ತಂದು, ಅವರು ಒಂದು ಗದ್ದೆ ತೊಗೋ ಹಾಗೆ ಆಯಿತು !! ಆದ್ರೆ ತುಂಬಾ ಬ್ಯುಸಿ ಅಂತ ಅವರ ಗದ್ದೆ ಕೆಲ್ಸನು ನಂಗೆ ಕೊಟ್ಟಿದ್ದಾರೆ !! ನಾನು ಅವರ ಹಾಫ್ -ಶರ್ಟ್(ಅರ್ಧಾಂಗಿ ) ಅಲ್ವಾ ಅದಿಕ್ಕೆ. ಹೇಳಿ ಬಿಟ್ಟಿದ್ದೀನಿ... ಎರೆಡೆರಡು ಗದ್ದೆಲಿ ಕೆಲಸ ಮಾಡಿ ಸಕತ್ತು experience ಸಿಕ್ಕಿದೆ ನಂಗೆ ,ಈ ಕಂಪ್ಯೂಟರ್ ನ ಗದ್ದೆಲಿ ನಿಂಗೆ ಹೆಲ್ಪ್ ಮಾಡಿರೋದಕ್ಕೆ ಪ್ರತಿಫಲವಾಗಿ, ನಿಜವಾಗಿ 1 ಅಕ್ರೆ ಜಾಗ,4 ದನ ಕೊಡ್ಸು ಅಂತ .. ಅಲ್ಲೇ ಒಂದು ಚಂದದ ಮನೆ ಮಾಡಿಕೊಂಡು ,ನಂದೇ ತೋಟದಲ್ಲಿ ಬೆಳೆದ ತರಕಾರಿ ತೆಗದು ಅಡುಗೆ ಮಾಡಬೇಕು ಅಂತ ಆಸೆ.ಕೋಳಿ ತಿನ್ನೋರಿಗೆ ಬೇಕಿದ್ರೆ ನಮ್ಮದೇ ಫಾರ್ಮ್ ನ ಕೋಳಿ ಸುಕ್ಕ ಮಾಡಿ ಕೊಡೋಣ... ಇದೆಲ್ಲ ಯಾವಾಗ ಸಾಧ್ಯನೋ ಗೊತ್ತಿಲ್ಲ. ಆದರು ಹೊಸ ದಿಕ್ಕಿನಲ್ಲಿ ಕನಸು ಕಾಣೋದನ್ನ ಕಲಿಸಿ ಕೊಟ್ಟು ,ಡೈಲಿ routine ನಲ್ಲಿ ಹೊಸ ಟೈಮ್ ಪಾಸು ಕೊಟ್ಟು ,ಹೊಸ ಉತ್ಸಾಹ ತಂದುಕೊಟ್ಟ , "farm ville" ಗೆ ಧನ್ಯವಾದಗಳು .

Posted by Amritha at 10:18 AM 4 comments  

ಚಿಕಾಗೋದಿಂದ ಬರೋವಾಗ .....

Thursday, February 4, 2010

ಇಂಜಿನಿಯರಿಂಗ್ ಫೈನಲ್ ಇಯರ್ ನಿಂದ ಯಂಡಮೂರಿ ವಿರೇಂದ್ರನಾಥ್ ಅವರ ವಿಜಯಕ್ಕೆ ೫ ಮೆಟ್ಟಿಲು ಪುಸ್ತಕವನ್ನು ಓದುತ್ತಿದ್ದೆ.. ಆದರೆ ಅದು ನನ್ನ ಮೇಲೆ ಪ್ರಭಾವ ಬೀರುತ್ತಿದೆಯೇ ? ಇಲ್ಲವೇ ಗೊತ್ತಾಗುತ್ತಿರಲಿಲ್ಲ... ಕೆಲಸಕ್ಕೆ ಸೇರಿದ ಮೇಲೆ ಓದಲು ಸಮಯ ಇರಲಿಲ್ಲ,ಯೋಚಿಸಲು ಮೊದಲೇ ಸಮಯವಿರಲಿಲ್ಲ.ಕೆಲಸ ಬಿಟ್ಟು,ಫ್ಯಾಮಿಲಿ ಅಂತ ಅಮೆರಿಕ ಗೆ ಬಂದ ಮೇಲೆ ತುಂಬಾ ಸಮಯ ದೊರಕಿದೆ.ಹಾಗಾಗಿ ಈ ಬಾರಿ ಭಾರತ ದಿಂದ ಬರುತ್ತಾ ನನ್ನ ಪುಸ್ತಕವನ್ನು ತೊಗೊಂಡು ಬಂದೆ. ಹೇಗೂ ತಂದಿದ್ದೆನಲ್ಲ ಎಂದು ಲಂಡನ್ ನಿಂದ ಚಿಕಾಗೋ ವರೆಗಿನ ವಿಮಾನದಲ್ಲಿ ಓದುತ್ತ ಬಂದೆ... ಓದಿದ ತಕ್ಷಣ ಅದು ನನ್ನ ಮೇಲೆ ಪ್ರಭಾವಬೀರಿದೆ ಅಂತ ತಿಳಿದುಕೊಳ್ಳುವ ಸನ್ನಿವೇಶ ಚಿಕಾಗೋ ವಿಮಾನ ನಿಲ್ದಾಣದಲ್ಲಿ ಏರ್ಪಟ್ಟಿತು.

ಲಂಡನ್ನಿಂದ ಬರುವ ವಿಮಾನ ತಡವಾಗಿ ಬಂದಿದ್ದ ಕಾರಣ ನಂಗೆ ಅಲ್ಲಿಂದ ನನ್ನ ಸಿಟಿಗೆ ಹೋಗುವ ವಿಮಾನ ಸಿಗಲಿಲ್ಲ(ಕಾನ್ನೆಕ್ಟಿಂಗ್ ಫ್ಲೈಟ್ "). ವಿಚಾರಿಸಿದರೆ ಈ ಸಂಜೆಯ ವಿಮಾನ ಬಿಟ್ಟರೆ ನಾಳೆ ಬೆಳಿಗ್ಗೆನೆ ಇರುವುದು ಎಂದು ಹೇಳಿ ಬೋರ್ಡಿಂಗ್ ಪಾಸು ಕೈಗೆ ಕೊಟ್ಟು,ನಾಳೆ ಬಾ ಎಂದರು!! ಏನಿದು ಹೊಸ ವಿಷಯವಲ್ಲ.. ಲಕ್ಷ ಗಟ್ಟಲೆ ಜನ ಸಂಚರಿಸುತ್ತಾರೆ,ಇಂಥದ್ದೆಲ್ಲ ಮಾಮೂಲು ಎಂದು ನೀವು ಅಂದು ಕೊಂಡರೂ, ನನಗೆ ಇಂಥ ಸನ್ನಿವೇಶ ಮೊದಲ ಬಾರಿ ಎದುರಾಗಿದ್ದು ,ಒಬ್ಬಳೇ ಸಂಚರಿಸುವಾಗ,ಅದೂ ೨ ದೊಡ್ಡ ೨೩ ಕೆ.ಜಿ ತೂಕದ ಬ್ಯಾಗ್ ಗಳನ್ನು ಹಿಡಿದುಕೊಂಡು,ದೊಡ್ಡ ಸಮಸ್ಯೆ ಎಂದು ಕಾಣಿಸಿತು.ಗಂಡನಿಗೆ ಫೋನ್ ಮಾಡಿದರೆ ಲೈನ್ ಸಿಗುತ್ತಿಲ್ಲ...ನನ್ನ ಪರಿಸ್ಥಿತಿ ನೋಡಿ ಜೋರಾಗಿ ಅಳಬೇಕು ಅನ್ನಿಸಿತು.ಅಷ್ಟರಲ್ಲಿ ನನಗೆ ನಾನು ಓದಿದ ಕೊನೆಯ ವಾಕ್ಯ ನೆನಪಾಯಿತು. ಅದು ಹೀಗಿದೆ "ಸಮಸ್ಯೆಯಾ ವಯಸ್ಸು ಕಡಿಮೆ.ಪ್ರತಿ ಸಮಸ್ಯಯಿಂದಲೂ ಒಂದು ಲಾಭವಿದೆ.ನಮಗೆ ಆಪ್ತರದವರಿಗೆ ಹಾರ್ಟ್ ಅಟ್ಯಾಕ್ ಆದರೆ ಆ ಅನುಭವದಿಂದ ನಾವು ಅಂಬುಲೆನ್ಸ್ ನಾ ಹೇಗೆ ಕರೆಯಬೇಕು,Emergency ವಾರ್ಡ್ನಲ್ಲಿ ರೋಗಿ ಯನ್ನು ಹೇಗೆ ಅಡ್ಮಿಟ್ ಮಾಡಬೇಕು ಎನ್ನುವ ವಿಷಯ ತಿಳಿಯುತ್ತವೆ". ಇವಿಷ್ಟು ನನಗೆ ನೆನಪದೊಡನೆ ನನ್ನ ಟೆನ್ಶನ್ ಕಮ್ಮಿಆಯಿತು. ನನ್ನದು ಇಷ್ಟು ದೊಡ್ಡ ಸಮಸ್ಯೆ ಅಲ್ಲ. ವಿಮಾನ ವಿಳಂಬವಾದರೆ ಏನು ಮಾಡಬೇಕು ಅನ್ನುವುದು ತಿಳಿದಿದೆ,ಆದರೆ ಕೇಳಲು ಭಯ.ಸರಿ ಇವತ್ತು ಈ ಭಯವನ್ನು ನಿವಾರಿಸಿಕೊಳ್ಳಲು ಅವಕಾಶ ಸಿಕ್ಕಿದೆ.ಏನಾಗುತ್ತೆ ನೋಡೋಣ ಅಂತ ಜೋರಾಗಿ ಉಸಿರೆಳೆದು ಕೊಂಡು, ಮತ್ತೆ ಮುಂದಿನ ವಿಮಾನದ ಟಿಕೆಟಿಂಗ್ ಕೌಂಟರ್ ಬಳಿ ಹೋದೆ. ೨೪ ಗಂಟೆ ಮುಂಚೆ ಬ್ಯಾಗ್ಯೆಜ್ ಚೆಕ್-ಇನ್ ಮಾಡಬಹುದಲ್ಲ,ಇವತ್ತು ಮಾಡಬಹುದೇ ಎಂದು ಕೇಳಿದೆ.ಸರಿ ಮಾಡೋಣ ಅಂತ ಅವ್ನು ಮಾಡಿಸಿಯೇ ಬಿಟ್ಟ!! ಅಬ್ಬ ಮಾತನಾಡಿದರೆ ಎಷ್ಟು ಸುಲಭ !! ಹ್ಯಾಂಡ್ ಬ್ಯಾಗ ಒಂದೇ ಹಿಡಿದುಕೊಂಡು ಏರ್ಪೋರ್ಟ್ ಸುತ್ತ ಬಹುದು.. ನಾನು ಕೇಳಿಲ್ಲ ಅಂದರೆ ಎಲ್ಲ ಹೊತ್ತುಕೊಂಡು ಹೋಗಬೇಕಿತ್ತಲ್ಲ ಅಂತ ಒಂದು ಸಮಸ್ಯೆಯನ್ನು ಗೆದ್ದ ಖುಷಿ ನನಗಾಯಿತು.ಮುಂದೆ, ಇರಲು ಒಂದು ಜಾಗ ಬೇಕು.. ಏರ್ಪೋರ್ಟ್ ನಲ್ಲಿ ಸುಮ್ಮನೆ ಕೂತಿರಲಿ? ಅಥವಾ ಹೋಟೆಲ್ ಗೆ ಹೋಗಿ ನಿಲ್ಲಲಿ ? ಯೋಚಿಸುತ್ತ information ಡೆಸ್ಕ್ ಹತ್ತಿರ ಹೋಗಿ,ಅವರಿಗೆ ನನ್ನ ಕಥೆ ಹೇಳಿ,ಹತ್ತಿರ ಇರಲು ಹೋಟೆಲ್ ಇದೆಯೇ ಎಂದು ಕೇಳಿದೆ.ಅದಿಕ್ಕೆ ಅವರು ವಿಳಂಬಮಾಡಿದ ಏರ್ ಲೈನ್ ನಾ ಕೇಳಿ ನಿಮಗೆ ಅವರು accommodation ಕೊಡಬಹುದು ಎಂದರು. ಒಹ್... ಇದು ನನಿಗೆ ಗೊತ್ತೇ ಇರಲಿಲ್ಲ.. ಕೊಟ್ಟರೆ ಆರಾಮಾಗಿ ಇರಬಹುದಲ್ಲ ಅಂತ ಅವರ ಟಿಕೆಟಿಂಗ್ ಕೌಂಟರ್ ಹುಡುಕಾಡಿ ಹೊರಟೆ.ಜೊತೆಯಲ್ಲೇ ಇನ್ನೊಂದು ಸಮಸ್ಯೆ..ಅವರು ಹೋಟೆಲ್ ನಲ್ಲಿ ರೂಂ ಕೊಟ್ಟರೂ,ಇಲ್ಲಿ ತನಕ ಒಬ್ಬಳೇ ಹೋಗಿ ಉಳಿದ್ದಿದ್ದಿಲ್ಲ ,ಏರ್ಪೋರ್ಟ್ ಗೆ ಹತ್ತಿರ ಇಲ್ಲ ಅಂದರೆ ವಾಪಸು ಬರುವುದು ಹೇಗೆ? ಹೇಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಿ ಅಂತ ಚಿಂತೆ ಆಯಿತು.ನನ್ನ ಪುಣ್ಯ ಅವರು ತಮ್ಮ ತಪ್ಪು ಒಪ್ಪಿಕೊಂಡು ನನಗೆ ರೂಂ ಮತ್ತು ಡಿನ್ನರ್ ಗೆ ವೌಚೆರ್ ಕೊಟ್ಟರು.ನನ್ನ ಸಮಸ್ಯೆ ಯನ್ನು ಅವರ ಮುಂದೆ ಇಟ್ಟೆ.ಹೇಗೆ ಹೋಗುವುದು ,ಬರುವದು ಹೇಗೆ ಅಂತ ಕೇಳಿದೆ. ಅವಳು ಹೋಟೆಲ್ ಏರ್ಪೋರ್ಟ್ ಒಳಗೆ ಇದೆ,ಏರ್ಪೋರ್ಟ್ ನ ಸಂಚಾರ ವ್ಯವಸ್ಥೆ (airport transit )ಉಪಯೋಗಿಸಿ ಅಂತ ಎಲ್ಲವನ್ನು ಹೇಳಿಕೊಟ್ಟಳು!! ಅವಳು ಹೇಳಿದಂತೆ ಹುಡುಕುತ್ತ ಹೊರಟಾಗ,ಅಲ್ಲಿ ಕೆಲಸ ಮಾಡುವ ಭಾರತೀಯ ನನ್ನ ಮುಖ ನೋಡಿ (ಚಿಂತಜನಕ ಮುಖ ?) ನನ್ನನ್ನು ಮಾತನಾಡಿಸಿ, ಸರಿಯಾದ ಮಾರ್ಗದರ್ಶನ ನೀಡಿದರು.ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ,ಪುಣ್ಯ ಬರಲಿ ಅಜ್ಜ ನಿನಗೆ ಎನ್ನುತ್ತಾ ಅವರು ಹೇಳಿದಂತೆ ನಡೆದಾಗ,ನನಗೆ ನೀಡಿದ ಹೋಟೆಲ್ ಕಂಡು ತುಂಬಾ ಖುಷಿಆಯಿತು. ಸಮಸ್ಯೆ ಮುಗಿದೇ ಹೋಯಿತು !! ನಾನು ಅಂದು ಕೊಂಡಂತೆ ಯಾವುದೇ ತರಹದ ತೊಂದರೆ ಆಗಲಿಲ್ಲ...ಸುಮ್ಮನೆ ಆತಂಕ ಪಟ್ಟೆನಲ್ಲ ಅಂದುಕೊಂಡು ಒಳಗೆ ನಡೆದೆ.ಹುಮ್ಮ್ ಈ ಸಮಸ್ಯೆ ಇಂದ ನನಗೆ ಆದ ಲಾಭ ಎಂದರೆ ೫ ಸ್ಟಾರ್ ಹೋಟೆಲ್ ನಲ್ಲಿ ಉಚಿತವಾಗಿ ನಿಲ್ಲುವ ಅವಕಾಶ!! ಎಷ್ಟು ಚೆನ್ನಾಗಿದೆ ಹೋಟೆಲ್ ಅಂತ ಖುಷಿ ಪಟ್ಟೆ.ಅಳುಕು ಬಿಟ್ಟು ಕೇಳುವುದರಲ್ಲಿ ಯಾವುದೇ ನಷ್ಟವಿಲ್ಲ,ಅನುಕೂಲವೇ ಆಗಿದೆ ಅಂತ ಅನುಭವದಿಂದ ತಿಳಿದುಕೊಂಡ ನಾನು, ಫ್ರಂಟ್ ಡೆಸ್ಕ್ ನಲ್ಲಿ ನಾನು ಇಲ್ಲಿಂದ ನನ್ನ ಗಂಡನಿಗೆ ಫೋನ್ ಮಾಡಲೇ? ನಾನು ಇಲ್ಲಿ ಉಳಿದುಕೊಳ್ಳುತ್ತಿರುವ ವಿಷಯ ಅವ್ರಿಗೆ ತಿಳಿಯದು ಎಂದು ಕೇಳಿದ ತಕ್ಷಣ ,ಖಂಡಿತ ಮಾಡಿ ಅಂತ ಫೋನ್ ಕೊಟ್ಟಳು!! ಅಜಿತ್ ಗೆ ವಿಷಯ ತಿಳಿಸಿದ ನಾನು, ನಾನು ನಿಜವಾಗಿ relaxed ಆಗಿದ್ದೇನೆ.ಮೊದಲ ಬಾರಿ ಯಾವುದೇ ರೀತಿಯ ಆತಂಕ ಕಾಡುತ್ತಿಲ್ಲ ಎಂದು ಹೇಳಿದೆ.ವಿಷಯ ಹೇಳಿ ಅಳುತ್ತೇನೆ ಅಂತ ನಿರೀಕ್ಷಿಸಿದ ಅವನಿಗೆ ಆಶ್ಚರ್ಯಆಗಿರಬೇಕು. ಯಾಕೆಂದರೆ ಸಣ್ಣ ಸಣ್ಣ ವಿಷಯಕ್ಕೂ ಅತಿ ಟೆನ್ಶನ್ ಮಾಡಿಕೊಳ್ಳೋ ಜನ ನಾನು, ಹೀಗೆಲ್ಲ ಆದರು ಆರಮಗಿದ್ದೇನೆ ಅಂದಿದ್ದು ನನಗೆ ಕೂಡ ಆಶ್ಚರ್ಯವೆ!!

ಅಂತು ಒಬ್ಬಳೇ ಡಿನ್ನರ್ ಗೆ ಕೂಡ ಹೋಗಿ,ಒಬ್ಬಳೇ ರೂಂ ನಲ್ಲಿ ಉಳಿದುಕೊಂಡು ಮಾರನೇ ದಿನದ ವಿಮಾನ ಹತ್ತಿ ನನ್ನ ಊರನ್ನು ಸೇರಿ,ಅಜಿತ್ ನ ನೋಡಿದಾಗ ನನ್ನ ಮೇಲೆ ನನಗೆ ಹೆಮ್ಮೆ ಅನಿಸಿತು.ನನ್ನ ಮಟ್ಟಿಗೆ ಅದು ದೊಡ್ಡ ಸಾಧನೆಯೇ.. ಈ ಸಾಧನೆಗೆ ವಿಜಯಕ್ಕೆ ೫ ಮೆಟ್ಟಿಲು ಪುಸ್ತಕದ ವಾಕ್ಯದ ಜೊತೆ ಗೆ ನನ್ನ ಅಣ್ಣ ನವರ ಬುದ್ದಿ ಮಾತುಗಳು ಕೂಡ ಕಾರಣ.ಅವರು ಕೂಡ ನನ್ನ ಸಣ್ಣ ಸಣ್ಣ ವಿಷಯಕ್ಕೆ ಆತಂಕ ಪಡುವ ಬುದ್ಧಿಗೆ ಅರ್ಥ ಇಲ್ಲ .. ನಿನಗೆ ನಿಜವಾದ ಸಮಸ್ಯೆಏನೆಂದು ಗೊತ್ತಿಲ್ಲ ಅಂತ ತಿಳಿಸಿಕೊಟ್ಟಿದ್ದರು. ಅವರಿಗಾದರೂ ನನ್ನ ಈ ಅನುಭವ,ಸಾಧನೆ(?) ಖುಷಿ ಕೊಡಬಹುದು ಹಾಗೂ ನನ್ನ ಹಾಗೆ ಮೊದಲ ಬಾರಿ ಒಬ್ಬರೇ ಪ್ರಯಾಣ ಮಾಡುವವರಿಗೆ ,ಈ ಸಮಸ್ಯೆ ಬಂದರೆ ನನ್ನ ಅನುಭವ ಉಪಯೋಗಕ್ಕೆ ಬಂದೀತು ಎಂದು ಬರೆದಿದ್ದೇನೆ.

Posted by Amritha at 10:59 AM 1 comments  

Newer Posts Older Posts Home
Subscribe to: Comments (Atom)

Blog Design by Gisele Jaquenod