ಇಂಜಿನಿಯರಿಂಗ್ ಫೈನಲ್ ಇಯರ್ ನಿಂದ ಯಂಡಮೂರಿ ವಿರೇಂದ್ರನಾಥ್ ಅವರ ವಿಜಯಕ್ಕೆ ೫ ಮೆಟ್ಟಿಲು ಪುಸ್ತಕವನ್ನು ಓದುತ್ತಿದ್ದೆ.. ಆದರೆ ಅದು ನನ್ನ ಮೇಲೆ ಪ್ರಭಾವ ಬೀರುತ್ತಿದೆಯೇ ? ಇಲ್ಲವೇ ಗೊತ್ತಾಗುತ್ತಿರಲಿಲ್ಲ... ಕೆಲಸಕ್ಕೆ ಸೇರಿದ ಮೇಲೆ ಓದಲು ಸಮಯ ಇರಲಿಲ್ಲ,ಯೋಚಿಸಲು ಮೊದಲೇ ಸಮಯವಿರಲಿಲ್ಲ.ಕೆಲಸ ಬಿಟ್ಟು,ಫ್ಯಾಮಿಲಿ ಅಂತ ಅಮೆರಿಕ ಗೆ ಬಂದ ಮೇಲೆ ತುಂಬಾ ಸಮಯ ದೊರಕಿದೆ.ಹಾಗಾಗಿ ಈ ಬಾರಿ ಭಾರತ ದಿಂದ ಬರುತ್ತಾ ನನ್ನ ಪುಸ್ತಕವನ್ನು ತೊಗೊಂಡು ಬಂದೆ. ಹೇಗೂ ತಂದಿದ್ದೆನಲ್ಲ ಎಂದು ಲಂಡನ್ ನಿಂದ ಚಿಕಾಗೋ ವರೆಗಿನ ವಿಮಾನದಲ್ಲಿ ಓದುತ್ತ ಬಂದೆ... ಓದಿದ ತಕ್ಷಣ ಅದು ನನ್ನ ಮೇಲೆ ಪ್ರಭಾವಬೀರಿದೆ ಅಂತ ತಿಳಿದುಕೊಳ್ಳುವ ಸನ್ನಿವೇಶ ಚಿಕಾಗೋ ವಿಮಾನ ನಿಲ್ದಾಣದಲ್ಲಿ ಏರ್ಪಟ್ಟಿತು.
ಲಂಡನ್ನಿಂದ ಬರುವ ವಿಮಾನ ತಡವಾಗಿ ಬಂದಿದ್ದ ಕಾರಣ ನಂಗೆ ಅಲ್ಲಿಂದ ನನ್ನ ಸಿಟಿಗೆ ಹೋಗುವ ವಿಮಾನ ಸಿಗಲಿಲ್ಲ(ಕಾನ್ನೆಕ್ಟಿಂಗ್ ಫ್ಲೈಟ್ "). ವಿಚಾರಿಸಿದರೆ ಈ ಸಂಜೆಯ ವಿಮಾನ ಬಿಟ್ಟರೆ ನಾಳೆ ಬೆಳಿಗ್ಗೆನೆ ಇರುವುದು ಎಂದು ಹೇಳಿ ಬೋರ್ಡಿಂಗ್ ಪಾಸು ಕೈಗೆ ಕೊಟ್ಟು,ನಾಳೆ ಬಾ ಎಂದರು!! ಏನಿದು ಹೊಸ ವಿಷಯವಲ್ಲ.. ಲಕ್ಷ ಗಟ್ಟಲೆ ಜನ ಸಂಚರಿಸುತ್ತಾರೆ,ಇಂಥದ್ದೆಲ್ಲ ಮಾಮೂಲು ಎಂದು ನೀವು ಅಂದು ಕೊಂಡರೂ, ನನಗೆ ಇಂಥ ಸನ್ನಿವೇಶ ಮೊದಲ ಬಾರಿ ಎದುರಾಗಿದ್ದು ,ಒಬ್ಬಳೇ ಸಂಚರಿಸುವಾಗ,ಅದೂ ೨ ದೊಡ್ಡ ೨೩ ಕೆ.ಜಿ ತೂಕದ ಬ್ಯಾಗ್ ಗಳನ್ನು ಹಿಡಿದುಕೊಂಡು,ದೊಡ್ಡ ಸಮಸ್ಯೆ ಎಂದು ಕಾಣಿಸಿತು.ಗಂಡನಿಗೆ ಫೋನ್ ಮಾಡಿದರೆ ಲೈನ್ ಸಿಗುತ್ತಿಲ್ಲ...ನನ್ನ ಪರಿಸ್ಥಿತಿ ನೋಡಿ ಜೋರಾಗಿ ಅಳಬೇಕು ಅನ್ನಿಸಿತು.ಅಷ್ಟರಲ್ಲಿ ನನಗೆ ನಾನು ಓದಿದ ಕೊನೆಯ ವಾಕ್ಯ ನೆನಪಾಯಿತು. ಅದು ಹೀಗಿದೆ "ಸಮಸ್ಯೆಯಾ ವಯಸ್ಸು ಕಡಿಮೆ.ಪ್ರತಿ ಸಮಸ್ಯಯಿಂದಲೂ ಒಂದು ಲಾಭವಿದೆ.ನಮಗೆ ಆಪ್ತರದವರಿಗೆ ಹಾರ್ಟ್ ಅಟ್ಯಾಕ್ ಆದರೆ ಆ ಅನುಭವದಿಂದ ನಾವು ಅಂಬುಲೆನ್ಸ್ ನಾ ಹೇಗೆ ಕರೆಯಬೇಕು,Emergency ವಾರ್ಡ್ನಲ್ಲಿ ರೋಗಿ ಯನ್ನು ಹೇಗೆ ಅಡ್ಮಿಟ್ ಮಾಡಬೇಕು ಎನ್ನುವ ವಿಷಯ ತಿಳಿಯುತ್ತವೆ". ಇವಿಷ್ಟು ನನಗೆ ನೆನಪದೊಡನೆ ನನ್ನ ಟೆನ್ಶನ್ ಕಮ್ಮಿಆಯಿತು. ನನ್ನದು ಇಷ್ಟು ದೊಡ್ಡ ಸಮಸ್ಯೆ ಅಲ್ಲ. ವಿಮಾನ ವಿಳಂಬವಾದರೆ ಏನು ಮಾಡಬೇಕು ಅನ್ನುವುದು ತಿಳಿದಿದೆ,ಆದರೆ ಕೇಳಲು ಭಯ.ಸರಿ ಇವತ್ತು ಈ ಭಯವನ್ನು ನಿವಾರಿಸಿಕೊಳ್ಳಲು ಅವಕಾಶ ಸಿಕ್ಕಿದೆ.ಏನಾಗುತ್ತೆ ನೋಡೋಣ ಅಂತ ಜೋರಾಗಿ ಉಸಿರೆಳೆದು ಕೊಂಡು, ಮತ್ತೆ ಮುಂದಿನ ವಿಮಾನದ ಟಿಕೆಟಿಂಗ್ ಕೌಂಟರ್ ಬಳಿ ಹೋದೆ. ೨೪ ಗಂಟೆ ಮುಂಚೆ ಬ್ಯಾಗ್ಯೆಜ್ ಚೆಕ್-ಇನ್ ಮಾಡಬಹುದಲ್ಲ,ಇವತ್ತು ಮಾಡಬಹುದೇ ಎಂದು ಕೇಳಿದೆ.ಸರಿ ಮಾಡೋಣ ಅಂತ ಅವ್ನು ಮಾಡಿಸಿಯೇ ಬಿಟ್ಟ!! ಅಬ್ಬ ಮಾತನಾಡಿದರೆ ಎಷ್ಟು ಸುಲಭ !! ಹ್ಯಾಂಡ್ ಬ್ಯಾಗ ಒಂದೇ ಹಿಡಿದುಕೊಂಡು ಏರ್ಪೋರ್ಟ್ ಸುತ್ತ ಬಹುದು.. ನಾನು ಕೇಳಿಲ್ಲ ಅಂದರೆ ಎಲ್ಲ ಹೊತ್ತುಕೊಂಡು ಹೋಗಬೇಕಿತ್ತಲ್ಲ ಅಂತ ಒಂದು ಸಮಸ್ಯೆಯನ್ನು ಗೆದ್ದ ಖುಷಿ ನನಗಾಯಿತು.ಮುಂದೆ, ಇರಲು ಒಂದು ಜಾಗ ಬೇಕು.. ಏರ್ಪೋರ್ಟ್ ನಲ್ಲಿ ಸುಮ್ಮನೆ ಕೂತಿರಲಿ? ಅಥವಾ ಹೋಟೆಲ್ ಗೆ ಹೋಗಿ ನಿಲ್ಲಲಿ ? ಯೋಚಿಸುತ್ತ information ಡೆಸ್ಕ್ ಹತ್ತಿರ ಹೋಗಿ,ಅವರಿಗೆ ನನ್ನ ಕಥೆ ಹೇಳಿ,ಹತ್ತಿರ ಇರಲು ಹೋಟೆಲ್ ಇದೆಯೇ ಎಂದು ಕೇಳಿದೆ.ಅದಿಕ್ಕೆ ಅವರು ವಿಳಂಬಮಾಡಿದ ಏರ್ ಲೈನ್ ನಾ ಕೇಳಿ ನಿಮಗೆ ಅವರು accommodation ಕೊಡಬಹುದು ಎಂದರು. ಒಹ್... ಇದು ನನಿಗೆ ಗೊತ್ತೇ ಇರಲಿಲ್ಲ.. ಕೊಟ್ಟರೆ ಆರಾಮಾಗಿ ಇರಬಹುದಲ್ಲ ಅಂತ ಅವರ ಟಿಕೆಟಿಂಗ್ ಕೌಂಟರ್ ಹುಡುಕಾಡಿ ಹೊರಟೆ.ಜೊತೆಯಲ್ಲೇ ಇನ್ನೊಂದು ಸಮಸ್ಯೆ..ಅವರು ಹೋಟೆಲ್ ನಲ್ಲಿ ರೂಂ ಕೊಟ್ಟರೂ,ಇಲ್ಲಿ ತನಕ ಒಬ್ಬಳೇ ಹೋಗಿ ಉಳಿದ್ದಿದ್ದಿಲ್ಲ ,ಏರ್ಪೋರ್ಟ್ ಗೆ ಹತ್ತಿರ ಇಲ್ಲ ಅಂದರೆ ವಾಪಸು ಬರುವುದು ಹೇಗೆ? ಹೇಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಿ ಅಂತ ಚಿಂತೆ ಆಯಿತು.ನನ್ನ ಪುಣ್ಯ ಅವರು ತಮ್ಮ ತಪ್ಪು ಒಪ್ಪಿಕೊಂಡು ನನಗೆ ರೂಂ ಮತ್ತು ಡಿನ್ನರ್ ಗೆ ವೌಚೆರ್ ಕೊಟ್ಟರು.ನನ್ನ ಸಮಸ್ಯೆ ಯನ್ನು ಅವರ ಮುಂದೆ ಇಟ್ಟೆ.ಹೇಗೆ ಹೋಗುವುದು ,ಬರುವದು ಹೇಗೆ ಅಂತ ಕೇಳಿದೆ. ಅವಳು ಹೋಟೆಲ್ ಏರ್ಪೋರ್ಟ್ ಒಳಗೆ ಇದೆ,ಏರ್ಪೋರ್ಟ್ ನ ಸಂಚಾರ ವ್ಯವಸ್ಥೆ (airport transit )ಉಪಯೋಗಿಸಿ ಅಂತ ಎಲ್ಲವನ್ನು ಹೇಳಿಕೊಟ್ಟಳು!! ಅವಳು ಹೇಳಿದಂತೆ ಹುಡುಕುತ್ತ ಹೊರಟಾಗ,ಅಲ್ಲಿ ಕೆಲಸ ಮಾಡುವ ಭಾರತೀಯ ನನ್ನ ಮುಖ ನೋಡಿ (ಚಿಂತಜನಕ ಮುಖ ?) ನನ್ನನ್ನು ಮಾತನಾಡಿಸಿ, ಸರಿಯಾದ ಮಾರ್ಗದರ್ಶನ ನೀಡಿದರು.ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ,ಪುಣ್ಯ ಬರಲಿ ಅಜ್ಜ ನಿನಗೆ ಎನ್ನುತ್ತಾ ಅವರು ಹೇಳಿದಂತೆ ನಡೆದಾಗ,ನನಗೆ ನೀಡಿದ ಹೋಟೆಲ್ ಕಂಡು ತುಂಬಾ ಖುಷಿಆಯಿತು. ಸಮಸ್ಯೆ ಮುಗಿದೇ ಹೋಯಿತು !! ನಾನು ಅಂದು ಕೊಂಡಂತೆ ಯಾವುದೇ ತರಹದ ತೊಂದರೆ ಆಗಲಿಲ್ಲ...ಸುಮ್ಮನೆ ಆತಂಕ ಪಟ್ಟೆನಲ್ಲ ಅಂದುಕೊಂಡು ಒಳಗೆ ನಡೆದೆ.ಹುಮ್ಮ್ ಈ ಸಮಸ್ಯೆ ಇಂದ ನನಗೆ ಆದ ಲಾಭ ಎಂದರೆ ೫ ಸ್ಟಾರ್ ಹೋಟೆಲ್ ನಲ್ಲಿ ಉಚಿತವಾಗಿ ನಿಲ್ಲುವ ಅವಕಾಶ!! ಎಷ್ಟು ಚೆನ್ನಾಗಿದೆ ಹೋಟೆಲ್ ಅಂತ ಖುಷಿ ಪಟ್ಟೆ.ಅಳುಕು ಬಿಟ್ಟು ಕೇಳುವುದರಲ್ಲಿ ಯಾವುದೇ ನಷ್ಟವಿಲ್ಲ,ಅನುಕೂಲವೇ ಆಗಿದೆ ಅಂತ ಅನುಭವದಿಂದ ತಿಳಿದುಕೊಂಡ ನಾನು, ಫ್ರಂಟ್ ಡೆಸ್ಕ್ ನಲ್ಲಿ ನಾನು ಇಲ್ಲಿಂದ ನನ್ನ ಗಂಡನಿಗೆ ಫೋನ್ ಮಾಡಲೇ? ನಾನು ಇಲ್ಲಿ ಉಳಿದುಕೊಳ್ಳುತ್ತಿರುವ ವಿಷಯ ಅವ್ರಿಗೆ ತಿಳಿಯದು ಎಂದು ಕೇಳಿದ ತಕ್ಷಣ ,ಖಂಡಿತ ಮಾಡಿ ಅಂತ ಫೋನ್ ಕೊಟ್ಟಳು!! ಅಜಿತ್ ಗೆ ವಿಷಯ ತಿಳಿಸಿದ ನಾನು, ನಾನು ನಿಜವಾಗಿ relaxed ಆಗಿದ್ದೇನೆ.ಮೊದಲ ಬಾರಿ ಯಾವುದೇ ರೀತಿಯ ಆತಂಕ ಕಾಡುತ್ತಿಲ್ಲ ಎಂದು ಹೇಳಿದೆ.ವಿಷಯ ಹೇಳಿ ಅಳುತ್ತೇನೆ ಅಂತ ನಿರೀಕ್ಷಿಸಿದ ಅವನಿಗೆ ಆಶ್ಚರ್ಯಆಗಿರಬೇಕು. ಯಾಕೆಂದರೆ ಸಣ್ಣ ಸಣ್ಣ ವಿಷಯಕ್ಕೂ ಅತಿ ಟೆನ್ಶನ್ ಮಾಡಿಕೊಳ್ಳೋ ಜನ ನಾನು, ಹೀಗೆಲ್ಲ ಆದರು ಆರಮಗಿದ್ದೇನೆ ಅಂದಿದ್ದು ನನಗೆ ಕೂಡ ಆಶ್ಚರ್ಯವೆ!!
ಅಂತು ಒಬ್ಬಳೇ ಡಿನ್ನರ್ ಗೆ ಕೂಡ ಹೋಗಿ,ಒಬ್ಬಳೇ ರೂಂ ನಲ್ಲಿ ಉಳಿದುಕೊಂಡು ಮಾರನೇ ದಿನದ ವಿಮಾನ ಹತ್ತಿ ನನ್ನ ಊರನ್ನು ಸೇರಿ,ಅಜಿತ್ ನ ನೋಡಿದಾಗ ನನ್ನ ಮೇಲೆ ನನಗೆ ಹೆಮ್ಮೆ ಅನಿಸಿತು.ನನ್ನ ಮಟ್ಟಿಗೆ ಅದು ದೊಡ್ಡ ಸಾಧನೆಯೇ.. ಈ ಸಾಧನೆಗೆ ವಿಜಯಕ್ಕೆ ೫ ಮೆಟ್ಟಿಲು ಪುಸ್ತಕದ ವಾಕ್ಯದ ಜೊತೆ ಗೆ ನನ್ನ ಅಣ್ಣ ನವರ ಬುದ್ದಿ ಮಾತುಗಳು ಕೂಡ ಕಾರಣ.ಅವರು ಕೂಡ ನನ್ನ ಸಣ್ಣ ಸಣ್ಣ ವಿಷಯಕ್ಕೆ ಆತಂಕ ಪಡುವ ಬುದ್ಧಿಗೆ ಅರ್ಥ ಇಲ್ಲ .. ನಿನಗೆ ನಿಜವಾದ ಸಮಸ್ಯೆಏನೆಂದು ಗೊತ್ತಿಲ್ಲ ಅಂತ ತಿಳಿಸಿಕೊಟ್ಟಿದ್ದರು. ಅವರಿಗಾದರೂ ನನ್ನ ಈ ಅನುಭವ,ಸಾಧನೆ(?) ಖುಷಿ ಕೊಡಬಹುದು ಹಾಗೂ ನನ್ನ ಹಾಗೆ ಮೊದಲ ಬಾರಿ ಒಬ್ಬರೇ ಪ್ರಯಾಣ ಮಾಡುವವರಿಗೆ ,ಈ ಸಮಸ್ಯೆ ಬಂದರೆ ನನ್ನ ಅನುಭವ ಉಪಯೋಗಕ್ಕೆ ಬಂದೀತು ಎಂದು ಬರೆದಿದ್ದೇನೆ.
ಚಿಕಾಗೋದಿಂದ ಬರೋವಾಗ .....
Thursday, February 4, 2010
Posted by Amritha at 10:59 AM
Subscribe to:
Post Comments (Atom)


1 comments:
Too good Amritha. Felt so good reading Kannada after a long time.
Post a Comment